ವರದಿ; ಜಯಂತ್ ಎ
ಉಡುಪಿ: ಕರಾವಳಿಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ನೀರಿನ ರಭಸಕ್ಕೆ ತುಂಬಿ ಹರಿದ ಸೌಪರ್ಣಿಕಾ ನದಿ ಹರಿಯುತ್ತಿದೆ.ಮಳೆಯ ಅಬ್ಬರಕ್ಕೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಳದ ಮುಂಭಾಗದ ಸೇತುವೆ ಮೇಲೆ ನೀರು ಹರಿದು ಹೋಗುವ ವಿಡಿಯೋ ವೈರಲ್ ಆಗಿದೆ.
ದೇವಳ ಮುಂಭಾಗದಲ್ಲಿದ್ದ ಸೇತುವೆ ಮೇಲೆ ಹರಿದ ನೀರು ಹರಿಯುತ್ತಿದ್ದು ನೀರಿನ ರಭಸಕ್ಕೆ ದೇವಳದ ಮುಂಭಾಗದ ಸೇತುವೆ ಮುರಿತಕ್ಕೊಳಗಾಗಿದೆ.
ಘಟನೆಯ ಹಿನ್ನಲೆ ದೇವಳಕ್ಕೆ ಬರುವ ಪಕ್ಕದ ವಸತಿಗ್ರಹದ ಭಕ್ತಾಧಿಗಳಿಗೆ ಸಂಪರ್ಕ ಕಡಿತವಾಗಿದೆ.

Social Icons