ಹೈದರಾಬಾದ್: ಈ ಘಟನೆಯನ್ನು ನೋಡಿದವರಿಗೆ ಅದು ಹೇಗೆ ರಿಯಾಕ್ಟ್ ಮಾಡಬೇಕು ಎನ್ನುವುದೇ ಗೊಂದಲಮಯವಾಗಿದೆ. ರಾತ್ರಿ ವೇಳೆ ರೆಸ್ಟೋರೆಂಟ್ಗೆ ನುಗ್ಗಿದ ಕಳ್ಳ ಕ್ಯಾಶ್ ಕೌಂಟರ್ ಸೇರಿದಂತೆ ಎಲ್ಲಾ ಕಡೆ ತಡಕಾಡಿದರೂ ಒಂದು ರೂಪಾಯಿ ಸಿಗಲಿಲ್ಲ ಎಂದು ನಿರಾಸೆಗೊಂಡು ತನ್ನ ಬಳಿ ಇದ್ದ 20 ರೂಪಾಯಿಯನ್ನು ತೆಗೆದು ಟೇಬಲ್ ಮೇಲಿಟ್ಟಿದ್ದಾನೆ. ನೋಟಿನ ಮೇಲೆ ನೀರಿನ ಬಾಟಲಿಯೊಂದನ್ನು ಇಟ್ಟು ಪರಾರಿಯಾದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ರಾಡ್ ಮೂಲಕ ಬಾಗಿಲು ಒಡೆದು ಇಷ್ಟು ರಿಸ್ಕ್ ತೆಗೆದುಕೊಂಡು ಕಳ್ಳತನ ಮಾಡಲು ಬಂದರೆ ಒಂದು ರೂಪಾಯಿ ಕೂಡ ಸಿಕ್ಕಿಲ್ಲ ಎಂದು ಕಳ್ಳನಿಗೆ ನಿರಾಸೆಯಾಗಿದೆ. ಅಲ್ಲೆ ಇದ್ದ ಸಿಸಿಟಿವಿಯತ್ತ ಮುಖ ಮಾಡಿ, ಇಷ್ಟು ದೊಡ್ಡ ರೆಸ್ಟೋರೆಂಟ್ನಲ್ಲಿ ವ್ಯಾಪಾರವೇ ಇಲ್ಲವೇ ಎಂದು ಪ್ರಶ್ನಿಸಿದ್ದಾನೆ. ಬಳಿಕ ತನ್ನಲ್ಲಿದ್ದ ಹಣದಲ್ಲಿ 20 ರೂಪಾಯಿ ನೋಟು ತೆಗೆದು ಕ್ಯಾಶ್ ಕೌಂಟರ್ ಟೇಬಲ್ ಮೇಲೆ ಇಟ್ಟಿದ್ದಾನೆ. ನೋಟು ಎಗರಿ ಹೋಗದಂತೆ ನೀರಿನ ಬಾಟಲಿ ಇಟ್ಟ ಕಳ್ಳ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಕಳ್ಳನ ಈ ವಿಡಿಯೋ ವೈರಲ್ ಆಗಿದೆ. ಹಲವು ಸ್ಥಳೀಯ ಮಾಧ್ಯಮಗಳು ಈ ಕುರಿತ ವಿಡಿಯೋ ಪೋಸ್ಟ್ ಮಾಡಿದೆ. ಕಳ್ಳನ ನಡೆಯ ಬಗ್ಗೆ ವ್ಯಾಪಕ ಚರ್ಚೆಯೂ ನಡೆಯುತ್ತಿದೆ.
Social Icons