ಬೆಂಗಳೂರು: ಚೆನ್ನಾಗಿರೋ ರೋಡ್ ಕಂಡರೆ ಸಾಕು ವಾಹನದ ವೇಗ ಸ್ಪೀಡ್ ಪ್ರಿಯರ ವಾಹನದ ವೇಗ ತಾನಾಗಿಯೇ ಹೆಚ್ಚಾಗುತ್ತೆ. ಇದೀಗ ಅತೀ ವೇಗ ಚಾಹನ ಚಲಾಯಿಸುವವರ ವಿರುದ್ಧ ಕೇಸ್ ದಾಖಲು ಮಾಡಲು ಪೊಲೀಸರು ಮುಂದಾಗಿದ್ದಾರೆ.
ಓವರ್ ಸ್ಪೀಡ್ ಗೆ ಬ್ರೇಕ್ ಹಾಕಲು ಎಡಿಜಿಪಿ ಅಲೋಕ್ ಕುಮಾರ್ ಹೊಸ ಅಸ್ತ್ರವನ್ನ ಬಳಸಲು ಮುಂದಾಗಿದ್ದಾರೆ. ಹೈವೇ ಅಂತ 130km ಅಧಿಕ ಸ್ಪೀಡ್ನಲ್ಲಿ ವಾಹನಗಳನ್ನ ಸಂಚರಿಸಿದ್ರೆ ಇನ್ಮುಂದೆ ಎಫ್ಐಆರ್ ದಾಖಲಾಗುತ್ತೆ. ಹೌದು, ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇನಲ್ಲಿ ರ್ಯಾಶ್ ಡ್ರೈವಿಂಗ್ ನಿಲ್ತಿಲ್. ಹೀಗಾಗಿ 130km ಅಧಿಕ ಸ್ಪೀಡ್ನಲ್ಲಿ ಸಂಚರಿಸ್ತಿರೋ ವಾಹನ ಸವಾರರಿಗೆ ಎಡಿಜಿಪಿ ಅಲೋಕ್ ಕುಮಾರ್ ಶಾಕ್ ಕೊಟ್ಟಿದ್ದಾರೆ.
ಮೈಸೂರು ಬೆಂಗಳೂರು ಹೈವೇ ಸಿಸಿಟಿವಿಯನ್ನ ಸಂಚಾರಿ ಮತ್ತು ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ್ ಕುಮಾರ್ ಅವರು ಪರಿಶೀಲನೆ ನಡೆಸಿದ್ದರು. ಪರಿಶೀಲನೆ ವೇಳೆ ಒಂದೇ ದಿನ 150ಕ್ಕೂ ಹೆಚ್ಚು ಅತಿ ವೇಗ ಚಾಲನೆ ಕೇಸ್ಗಳು ಪತ್ತೆಯಾಗಿವೆ. ಅತಿ ವೇಗದ ಚಾಲನೆಯಿಂದ ಶೇ. 90 ರಷ್ಟು ಅಪಘಾತವಾಗುವ ಸಾಧ್ಯತೆ ಇರುತ್ತೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 1ರಿಂದ ಅತಿ ವೇಗ ಚಾಲನೆ ಮಾಡಿದೋರ ವಿರುದ್ಧ ಎಫ್ಐಆರ್ ದಾಖಲಿಸಲು ಮುಂದಾಗಿದ್ದಾರೆ. 130km ವಾಹನಗಳ ಸ್ಟೀಡ್ ದಾಟಿದ್ರೆ ಎಫ್ಐಆರ್ ದಾಖಲಾಗುತ್ತದೆ. ಈ ಬಗ್ಗೆ ಎಕ್ಸ್ ಖಾತೆ ಮೂಲಕ ಓವರ್ ಸ್ಪೀಡ್ ಓಡಿಸೋರಿಗೆ ಅಲೋಕ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಓವರ್ ಸ್ಪೀಡ್, ರ್ಯಾಶ್ ಡ್ರೈವಿಂಗ್ ಮಾಡೋರಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.
Social Icons