ಮಂಗಳೂರು: ಕುಲಶೇಖರ ಉಪಕೇಂದ್ರದಿಂದ ಹೊರಡುವ ವಾಮಂಜೂರು ಫೀಡರ್ ಪ್ರದೇಶಗಳಲ್ಲಿ ಜೂ.27ರಂದು ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
ಜಂಪರ್ ಬದಲಾವಣೆ ಹಾಗೂ ದುರಸ್ತಿ ಕಾಮಗಾರಿ ನಡೆಯಲಿರುವುದರಿಂದ ಅಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಪಚ್ಚನಾಡಿ, ದೇವಿನಗರ, ವಾಮಂಜೂರು, ಮಂಗಳನಗರ, ಅಮೃತನಗರ, ಕೆತ್ತಿಕಲ್ಲು, ಆರ್ಟಿಒ ಟೆಸ್ಟ್ ಯಾರ್ಡ್, ಸಂತೋಷ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ಜೆಪ್ಪು ಉಪಕೇಂದ್ರದಿಂದ ಹೊರಡುವ ಬಜಾಲ್ ಮತ್ತು ಕಡೇಕಾರ್ ಫೀಡರ್ಗಳಲ್ಲಿ ಜೂ. 27ರಂದು ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಜಂಪರ್ ಬದಲಾವಣೆ ಹಾಗೂ ದುರಸ್ತಿ ಕಾಮಗಾರಿ ನಡೆಯಲಿರುವುದರಿಂದ ಬಜಾಲ್, ಬೊಲ್ಲ, ಬಜಾಲ್ ಚರ್ಚ್, ಅಂಗಡಿಮಾರ್, ಆದಿಮಾಯೆ ಟೆಂಪಲ್, ಗಣೇಶ್ ನಗರ, ಕುಡುತಡ್ಕ, ಪೆರ್ಜಿಲ, ಪ್ರಗತಿನಗರ, ಸಾಲ್ಯಾನ್ ರೈಸ್ ಮಿಲ್, ಸತ್ಯ ನಾರಾಯಣ ಭಜನಾ ಮಂದಿರ, ತಂದೊಳಿಗೆ, ತೋಚಿಲ, ವೈದ್ಯನಾಥ ದೇವಸ್ಥಾನ, ಗುರುವನ, ರಿವರ್ ಡೇಲ್, ಮಲ್ಲಿಕಾರ್ಜುನ, ತಾರ್ದೊಲ್ಯ, ವಂಶಿ ಗ್ಯಾರೇಜ್, ಜೆಪ್ಪಿನಮೊಗರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ನಂದಿಗುಡ್ಡ ಉಪಕೇಂದ್ರದಿಂದ ಹೊರಡುವ ಮಂಗಳಾದೇವಿ ಮತ್ತು ಜೆಪ್ಪುಉಪಕೇಂದ್ರದಿಂದ ಹೊರಡುವ ವೆಲೆನ್ಸಿಯ ಫೀಡರ್ಗಳಲ್ಲಿ ಜೂ.27ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಜಂಪರ್ ಬದಲಾವಣೆ ಮತ್ತು ದುರಸ್ತಿ ಕಾಮಗಾರಿ ನಡೆಯಲಿರುವುದರಿಂದ ಕಂಕನಾಡಿ, ಫಳ್ನೀರ್, ಹೈಲ್ಯಾಂಡ್ ಹಾಸ್ಪಿಟಲ್, ಗೋರಿಗುಡ್ಡ, ಪಂಪ್ವೆಲ್, ಸುವರ್ಣಲೇನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Social Icons